ಎತ್ತ ಹೋದನಮ್ಮ?

ಎತ್ತ ಹೋದನಮ್ಮ?
ನಮ್ಮಯ ಕೃಷ್ಣಾ
ಎತ್ತ ಹೋದನಮ್ಮ|
ನಾವು ಅವನಕೂಡೆ
ಆಡೆ ಬಂದೆವಮ್ಮ||

ಅವನು ಏಲ್ಲಿ ಹೋಗುವಂತಿಲ್ಲ
ಅವನ ನಾನು ಬಿಡುವುದೂ ಇಲ್ಲ|
ಅವನ ತರಲೆ ಕೇಳಿ ಕೇಳಿ
ನನಗಂತೂ ಸಾಕಾಗಿದೆ|
ಅದಕೆ ಅವನ ಕಂಬಕೆ
ಕಟ್ಟಿಹಾಕಿ, ಹಾಲು ಮೊಸರು
ಬೆಣ್ಣೆಯನೆಲ್ಲಾ ದೂರವಿರಿಸಿರುವೆ||

ಅವನದೇನು ತಪ್ಪಿಲ್ಲಮ್ಮ
ಎಲ್ಲಾ ನಮಗಾಗಿಯೇ ಮಾಡಿದನಮ್ಮ|
ಅವನೊಬ್ಬನಿಗೇಕೆ ಇಂಥ ಶಿಕ್ಷೆ
ನಮಗೂ ನೀಡಿ ಅಂತಹುದೇ ಶಿಕ್ಷೆ|
ನಾವು ಅವನ ಬಿಟ್ಟು
ಎಲ್ಲೂ ಹೋಗುವುದೇ ಇಲ್ಲ ||

ಮುದ್ದು ಮಕ್ಕಳ ಮಾತ ಕೇಳಿ
ನಕ್ಕು ಯಶೋಧೆ |
ಶ್ರೀ ಕೃಷ್ಣನ ಕೈಯ ಬಿಡಿಸಿ
ಮಕ್ಕಳ ಮಾಣಿಕ್ಯನ
ಅಪ್ಪಿ ತಾ ಮುದ್ದಿಸಿ|
ಹಾಲು ಮೊಸರನ್ನೆಲ್ಲಾ
ಮಕ್ಕಳಿಗೆ ನೀಡಿ ಆನಂದಿಸಿ|
ಜನ್ಮ ಧನ್ಯತೆಯಿಂದ ಭಾಷ್ಪಿಸಿದಳು||

ಅತ್ತ ಮತ್ತೆ ಕೃಷ್ಣ ಗೆಳೆಯರ ಕೂಡಿ
ಹೊರಗೆ ಓಡಿದನಮ್ಮ
ಮತ್ತೆ ತರಲೆಗಳ
ಸರಮಾಲೆಯನೆ ತಂದನಮ್ಮ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂಗರ್ಭದೊಳಗೆ ಬದುಕು
Next post ಜೀವರೂಪ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys